March 27, 2007

Need Info

Gururaj is doing fine now. We are planning to help him post-operation to make him self-reliant.
He is an unskilled person and may not have completed SSLC too. My approach is to provide him some kind of training to gain skill in certain area. Would you mind sharing with us any information regarding schools/institutions/training centers which help these kind of causes? Your help will be extremely appreciated.I did hear from someone about some Job Oriented Courses in institutions run by Dharmasthala temple trust. Please let us know if you have any contact information regarding the same.

I was also intrested in collating the information regarding various courses that one can take up after S.S.L.C./P.U.C. (apart from B.E./M.B.B.S.). The information should contain the course details and the future career path. I am collecting this information to help a group, which is planning to conduct guidance sessions in Kannada schools in rural areas. Any information or pointers to information is highly appreciated.

March 26, 2007

ಮೇನತ್ತು

ಮೇನತ್ತು = ವಿಶೇಷ, ತುಂಬ ಮೆಹನತ್ತಿನಿಂದ ಮಾಡಿದ್ದು.
ಪ್ರಾಯಶಃ 'ಮೆಹನತ್' ಶಬ್ದ ಇದರ ಮೂಲವಾಗಿರಬಹುದು.

ಈ ಪದವನ್ನ, ನಾನು ಹೆಚ್ಚು ಕೇಳಿದ್ದು ಅಡುಗೆಮನೆಯಲ್ಲಿ:-))
'ಮಕ್ಳ್ ಬತ್ತೊ (ಬರ್ತಾರೆ). ಮೇನತ್ತ್ ಅಂದ್ಕಂಡ್ ಕೆಸಿನಸೊಪ್ಪಿನ್ ಪತ್ರೊಡೆ ಮಾಡಿದ್ದೆ'.
'ಮೇನತ್ತ್ ಅಂದ್ಕಂಡ್ ಮಾಡದ್ದೆ ಬಂತ್. ಉಪ್ಪ್ ಜಾಸ್ತಿಯಾಯಿ ಎಲ್ಲ ಪುಸ್ಕಟಿ ಆಯ್ತ್':-))
'ನೀನ್ ಮನ್ಯೆಗಿಪ್ಪುದಿಲ್ಲ ಅಂತೇಳಿ (ಅಂತ ಹೇಳಿ) ಮೇನತ್ತ್ ಅಂದ್ಕಂಡ್ ಮಾಡದ್ದ್ ಕಾಣ್. ಅದ್ ನಿಂಗ್ ಸೇರುದಿಲ್ಲ (ರುಚಿಸಲ್ವಾ), ಸುಳ್ಳಾ? ಈಗಿನ್ ಕಾಲದ್ ಮಕ್ಳಿಗೆ ಎಂತ ಮಾಡಿರೂ ತರವಾತಿಲ್ಲ.'

ಪಾ.ವೆಂ.ಆಚಾರ್ಯರ ಕಾವ್ಯನಾಮ - ಲಾಂಗೂಲಾಚಾರ್ಯ'.

ಇವತ್ತಿನ ಸವಾಲು -
ಇದರ ಅರ್ಥ ಏನು - 'ಗಂಟಿ' (ತುಂಬ ಸುಲಭದ ಸವಾಲು).

ಬೋನಸ್ ಪ್ರಶ್ನೆ -
'ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು' - ಇದು ಯಾರ ಜೀವನಚರಿತ್ರೆ?

March 18, 2007

ಟೋಪಿ

ಇದು ಹಳೆಯ ಕವನ (?). ಇವತ್ತು ಮತ್ತೆ ನೆನಪಾಯ್ತು:-))

ನಾನು ಹೋಗಿದ್ದೆ ಇವತ್ತು hair cut-ಗೆ,
ಕತ್ತರಿ ಹಿಡಿದು ಕಾದಿದ್ದಳು ತರಳೆ ಓರ್ವಳು

"ಯಾವ ಲೆವೆಲ್ ಇ-style ಬೇಕು ಭಾಗವತರೆ?",
ವಯ್ಯಾರದಿಂದ ಉಲಿದಳು ಕತ್ತರಿ ಝಳಪಿಸುತ್ತ

ಉತ್ತರಿಸಲು ಸಾಧ್ಯವೆ ಷೋಡಶಿಯ ಪ್ರಶ್ನೆಗೆ ?
ಅವಳ ಕಣ್ಣ ಮಿಂಚಿನಲ್ಲಿ ನಾ ಮುಳುಗಿರುವಾಗ?

ಶಿಸ್ತಾಗಿ ಅವಳ ಕೈಗೆ ಮಂಡೆ ಕೊಟ್ಟು ಹೇಳಿದೆ,
"ಎನೊ ಒಂದು, ಒಟ್ನಲ್ಲಿ level-ಆಗಿ cut ಮಾಡಮ್ಮ",

"ಇದು ಯಾವ ಸೀಮೆಯ ಬಕ್ರ, ವಕ್ಕರಿಸಿದ್ದಾನೆ"?
ಪಿಳಿಪಿಳಿ ಕಣ್ಣು ಬಿಟ್ಟಳು ತರುಣಿ ಅಚ್ಚರಿಯಿಂದ.

ಬಡಪಾಯಿ ಮಂಡೆ ಹಿಡಿದು ಕುಟ್ಟಿ, ತಟ್ಟಿ, ಇನ್ನೂ ಏನೇನೋ..
ಭಯವಾಯ್ತು ನನಗೆ " ಇದು hari cut-ಓ? brain wash-ಓ"?

"ಸಮಾಧಾನ ಮಹರಾಯ್ತಿ, ತೋರು ಸ್ವಲ್ಪ ಕರುಣೆ,
knowledge ಎಲ್ಲ ಮಂಡೆಯಿಂದ ಉದುರೀತು, ಜೋಪಾನ".

"ಆಯ್ತಪ್ಪ, ನೀನ್ ಹೇಳಿದಾಂಗೆ ಮಾಡುವ, ಅಕಾ?
ಬೊಬ್ಬೆ ಮಾತ್ರ ಹಾಕ್ಬೇಡ, ಕೈ ಮುಗೀತೆ ಮಾರಾಯ".

ಅಲವತ್ತುಕೊಂಡಳು ಹುಡುಗಿ, ಸುಳ್ಳು ದೈನ್ಯದಿಂದ,
ಚಿಕ್ಕ ಮಕ್ಕಳಲ್ಲಿ ಅಮ್ಮಂದಿರು sorry ಕೇಳುವ ಹಾಗೆ

ಈಗ ನಯ ನಾಜೂಕು, ತರುಣಿಯ ಲಾಸ್ಯ ಕೆಲಸಕ್ಕೆ,
ನನಗೋ ಮೈಯಲ್ಲಿ ಮಿಂಚು ಅವಳ ಪ್ರತಿ ಸ್ಪರ್ಶಕ್ಕೂ:-)

ಮಂಡೆ ಬೋಳಿಸಿ, ಎದ್ದೇಳಿಸಿ, 'ಉಸ್ಸಪ್ಪ' ಅಂದಳು ಹುಡುಗಿ,
"bill ಎಷ್ಟಾಯ್ತು" ಅಂತ purse ತಡಕಾಡಿದೆ ನಾನು

15$ hair cut, 45$ extra charge. 60$ ಒಟ್ಟಿಗೆ,
ನಿಮ್ಮ ಬೊಬ್ಬೆ ಕೇಳಿ, ಓಡಿ ಹೋಗಿದ್ದಾರೆ 3 ಗಿರಾಕಿಗಳು":-))

ಟೋಪಿ ತೆಗೆದುಕೊಂಡೆ ನನ್ನ ಬೋಳು ಮಂಡೆಗೆ
ಟೋಪಿಯೂ ಹಾಕಿದರು, ಮಂಡೆಯೂ ಬೋಳಿಸಿದರು:-))

March 6, 2007

'ಹಂಬಕ'

ಗುರುರಾಜ್ ಚಿಕಿತ್ಸೆಗೆ ಧನಸಹಾಯದ ಮನವಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸದ್ಯದ ಒಟ್ಟು ಸಂಗ್ರಹಿತ ಮೊತ್ತ - ರೂ ೪೧,೦೦೦.
ಸಾಧ್ಯವಾದರೆ ಈ ವಾರಾಂತ್ಯವೇ ಗುರುರಾಜನನ್ನು ಆಸ್ಪತ್ರೆಗೆ ದಾಖಲಿಸಲಾಗುವುದು. ನಿಮ್ಮ ಸಹಾಯಕ್ಕೆ ನಾವು ಆಭಾರಿ.

'ಹಂಬಕ' = ಮೋಸ.
ಶಾಂತಲ ಹೇಳಿದ ಹಾಗೆ ಇದರ ಮೂಲ 'humbug' ಇರಬಹುದೇನೋ ಅಂತ ನನ್ನ ಅನಿಸಿಕೆ ಕೂಡ.

ಈ ಶಬ್ದ ಉಪಯೋಗ ಆಗುವುದು ಚಿಕ್ಕಪುಟ್ಟ ಮೋಸಕ್ಕೆ. ಅದೂ, ಆಟಗಳಲ್ಲಿ ಜಾಸ್ತಿ.
'ಅಣ್ಣಯ್ಯ ಬರೀ ಹಂಬಕ. ಗೆಲ್ಲಕಂತೇಳಿ ಮೋಸ ಮಾಡ್ತ'
'ಮೊನ್ನೆ ತಮಿಳ್ನಾಡಿನವ್ರ್ ಹಂಬಕ ಮಾಡಿ ಗೆದ್ದ್ರ್'
'ಅವ ಹಂಬಕದ ಪುಟ್ಟ. ಏಗ್ಳಿಕ್ ಕಂಡ್ರೂ ಅವ್ನೆ ಗೆಲ್ಕ್'

ಬೋನಸ್ ಪ್ರಶ್ನೆಗೆ ಉತ್ರ
'ಅಡಿಗ' ಅನ್ನುವ ಪದಮೂಲದ ಮೇಲೆ 'ಅಡಿಗಳು' ಎನ್ನುವುದು ವ್ಯಾಕರಣದ ದೃಷ್ಟಿಯಿಂದ ಸರಿ. ದೇವರ ಅಡಿಗಳನ್ನು ಪೂಜಿಸುವವನೇ ಅಡಿಗ. ಹಾಗಾಗಿ ಅದರ ಬಹುವಚನ 'ಅಡಿಗಳು'.
ಇದನ್ನ ಹೇಳ್ತಾ ಇರೋದು ನಾನಲ್ಲ. ಪಾ.ವೆಂ.ಆಚಾರ್ಯ:-)) ಅವರ 'ಪದಾರ್ಥ ಚಿಂತಾಮಣಿ'ಯಲ್ಲಿ ಇದರ ಪ್ರಸ್ತಾಪ ಇದೆ. ಓದಿ ತುಂಬ ವರ್ಷ ಆಯ್ತು, ತಪ್ಪಿದ್ರೆ ಸರಿಮಾಡಿ:-)

ರೂಢಿಯಲ್ಲಿ 'ಅಡಿಗರು' ಅನ್ನುವ ಪ್ರಯೋಗ ಜಾಸ್ತಿ. 'ಅಡಿಗಳು' ಅನ್ನುವ ಪ್ರಯೋಗ ಕುಂದಾಪುರದಲ್ಲಿ ತುಂಬಾ ಕೇಳಿದ್ದೇನೆ. ಕುಂದಾಪುರದ ಹೊರಗೆಲ್ಲ 'ಅಡಿಗರು'.

ಇವತ್ತಿನ ಸವಾಲು:-
ಇದರ ಅರ್ಥ ಏನು - 'ಮೇನತ್ತು'?

ಬೋನಸ್ ಪ್ರಶ್ನೆ :-
ಪಾ.ವೆಂ.ಆಚಾರ್ಯರ ಕಾವ್ಯನಾಮ ಏನು?

March 1, 2007

ಅಟ್ರಕಾಣಿ

'ಅಟ್ರಕಾಣಿ' = ಕಳಪೆ, ಕೀಳು ದರ್ಜೆ
ಮೂಲ ಗೊತ್ತಿಲ್ಲ. ಬೇರೆ ಅರ್ಥ ಇದ್ರೆ ತಿಳಿಸಿ.

ಭಾಗವತ್ರು 'ಅಟ್ರಕಾಣಿ' ಜನ ಅಲ್ಲ. ಮಸ್ತ್ ಒಳ್ಳೆ ಜನ ಅವ್ರ್. ಏನಂತ್ರಿ ಅಸತ್ಯಿಗಳೆ?:-)
"ಕೆಲ್ಸ ಮಾಡಿರೆ (ಮಾಡಿದ್ರೆ) ಲೈಕ್ ಮಾಡಿ ಮಾಡ್ಕ್. 'ಅಟ್ರಕಾಣಿ' ಕೆಲ್ಸ ಮಾಡುಕಾಗ"
ಇವತ್ತ್ ಬರುಕೆ (ಬರೆಯಲಿಕ್ಕೆ) ಮಂಡಿಗೆ ಎಂತದೂ ಹೊಳಿತಿಲ್ಲ. ಇದ್ 'ಅಟ್ರಕಾಣಿ' ಪೋಸ್ಟ್ ಆಯ್ತ್:-((

'ಅಟ್ರಕಾಣಿ'ಗೆ ಮೋಸ ಎನ್ನುವ ಅರ್ಥವೂ ಇದೆಯ ಅಂತ ಅನಿಸ್ತಿದೆ. ಸರಿ ಗೊತ್ತಿಲ್ಲ. Reviewers ಮತ್ತೆ inspector ಅಟ್ರಕಾಣಿಯ ಅಲ್ದಾ ಕಾಂಬ:-)

ಇವತ್ತಿನ ಸವಾಲು-
ಇದರ ಅರ್ಥ ಏನು - 'ಹಂಬಕ'?

ಬೋನಸ್ ಪ್ರಶ್ನೆ -
ಇದ್ರಲ್ಲಿ ಯಾವ್ದು ಸರಿ - 'ಅಡಿಗರು' ಅಥವ 'ಅಡಿಗಳು'?

February 24, 2007

ಮಿಣ್ಣಗೆ

'ಮಿಣ್ಣಗೆ' = ಸದ್ದಿಲ್ಲದೆ, ಯಾರಿಗೂ ಗೊತ್ತಾಗದ ಹಾಗೆ ಇರೋದು, ಯಾರಿಗೂ ಗೊತ್ತಾಗದ ಹಾಗೆ ಎನಾದ್ರೂ ಮಾಡೋದು, keeping low profile ಅಂತಾನೂ ಅನ್ಬಹುದು.

ಗುಬ್ಬಚ್ಚಿ ಮಿಣ್ಣಗೆ ಬಂದ್ ಹಾಲ್ ಕುಡ್ದದ್ದನ್ನ್ ಬೆಕ್ಕ್ ಕಂಡಿತ್ತ್:-)
ತುಳಸಿಯಮ್ಮ ಮಿಣ್ಣಗಿದ್ರಪ್ಪ. ಗುರುದಕ್ಷಿಣೆ ಕೊಡ್ಕಾತ್ತ್ ಅಂದ್ಕಂಡೇನೊ:-)
"ಮಾಣಿಗೆ ಜೋರ್ (ಬಯ್ಯೋದು) ಮಾಡಿದ್ಯ? ನಿನ್ನೆಯಿಂದ ಮಿಣ್ಣಗಿತ್ತಪ್ಪ"
'ಮಿಣ್ಣ'ಗಿಪ್ಪುದು ಅಂದ್ರೆ ಶಬ್ದ ಇಲ್ದೆ ಅವರಷ್ಟಕ್ಕ್ ಅವರಿಪ್ಪುದು. 'ಮಿಣ್ಣ'ಗಿದ್ದೂ ಮಿನುಗುದು ಅಸತ್ಯಿಗಳಿಗೆ ಮಾತ್ರ ಸಾಧ್ಯ:-)

ಈ ಶಬ್ದದ ಮೂಲ ನನಗೆ ಗೊತ್ತಿಲ್ಲ. ಬಲ್ಲವರು ತಿಳಿಸುವಂತವರಾಗಿ:-)
ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರು ತಮ್ಮ ಕವನವೊಂದರಲ್ಲಿ (ಮಿಣ್ಣಗಿನ ಧೂರ್ತ) ಇದನ್ನ ಉಪಯೋಗಿಸಿದ್ದಾರೆ.ಕವನದ ಹೆಸರು ನೆನಪಿಲ್ಲ (ವಯಸ್ಸಾಯ್ತು ನೋಡಿ). 'ತರಂಗ' ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತ್ತದು.

ಇತ್ತೀಚಿನ ಸುದ್ದಿ. 'ಎಣ್ಣು' ಪದವನ್ನು ಸಾಹಿತ್ಯದಲ್ಲಿ ಉಪಯೋಗಿಸಲಾಗಿದೆ. ಮಿತ್ರಾ ವೆಂಕಟ್ರಾಜ್ ತಮ್ಮ 'ಒಂದು ಒಸಗೆ ಒಯ್ಯುವುದಿತ್ತು' ಕಥೆಯಲ್ಲಿ ಉಪಯೋಗಿಸಿದಾರೆ. ದೆಹಲಿಯ 'ಕಥಾ' ಪ್ರಶಸ್ತಿ ವಿಜೇತ ಕಥೆ. ಭಾಗವತ್ರ ಅಚ್ಚುಮೆಚ್ಚಿನ ಕಥೆ ಅದು. ಕಥೆಗಾಗಿ ಇಲ್ಲಿ ಕ್ಲಿಕ್ಕಿಸಿ - http://kanlit.com/modes/home/brh/168/.html
"ಶೇಷಮ್ಮ ತನ್ನ ಕಾಲದ ಗತವೈಭವವನ್ನು, ಮುಖ್ಯವಾಗಿ ತುಂಬಿತುಳುಕುತ್ತಿದ್ದ ಮನೆಯಂದಿಗರನ್ನು, ಚಾವಡಿ ಭರ್ತಿಯಾಗುತ್ತಿದ್ದ ಊಟದ ಪಂಕ್ತಿಯನ್ನು ಎಣ್ಣಿ, ಎಣ್ಣಿ ರೋದಿಸುತ್ತಿದ್ದರೆ ಜಲಜೆಗೂ ಹೌದೆಂಬಂತೆ ಕಾಣಿಸುತ್ತಿತ್ತು."

ಇವತ್ತಿನ ಸವಾಲು
ಇದರ ಅರ್ಥ ಏನು - 'ಅಟ್ರಕಾಣಿ'?

Bonus question:-) - ನಾವು 'ಕಥನ (ಜಾಗತಿಕ ಕನ್ನಡಿಗರ ಕೂಟ)'ದಿಂದ ನಡೆಸಿದ ಕಥಾಸ್ಪರ್ಧೆಯಲ್ಲಿ ವಿಜೇತವಾದ ಎರಡು ಕಥೆಗಳು http://kanlit.com/ ಜಾಲತಾಣದಲ್ಲಿವೆ. ಅವು ಯಾವುವು?

ಸರಿ ಉತ್ತರ ಹೇಳಿದವರಿಗೆ ಕೋಟೇಶ್ವರ ಹಬ್ಬದಲ್ಲಿ ಒಂದು ಸೇರು ಮುಂಡಕ್ಕಿ:-))

February 20, 2007

ಎಣ್ಣು

ಪ್ರೇಮಜ್ವರದ ಮುಂದಿನ ಹಂತ 'ವಿರಹ'. ಅದಕ್ಕಾಗಿ ಇವತ್ತಿನ ಶಬ್ದ 'ಎಣ್ಣು':-)
'ಎಣ್ಣು' = ಯೋಚಿಸುವುದು, ಚಿಂತಿಸುವುದು

ಶಿವು, ಇನ್ನೂ ವಿರಹ ವಿರಹ ಅಂತ 'ಎಣ್ಣ'ತಿದ್ರ್ಯಾ?
ತುಳಸಿಯಮ್ಮ, ನಂಗೆ ಗುರುದಕ್ಷಿಣೆ ಕೊಡ್ಕಾತ್ತ್ ಅಂತ 'ಎಣ್ಣ'ತಿದ್ರ್ಯಾ?
"ನಾವೆಲ್ಲ ಹುಶಾರಿತ್ತ್. ಮನೆ ಬಗ್ಗೆ 'ಎಣ್ಣ'ಬೇಡ".
"ಇನ್ನೂ 'ಎಣ್ಣು'ದೆಂತಕೆ? ಹೋಪವ್ರ್ ಹೋತ್ರ್. ಅದನ್ನೆಲ್ಲ ತಡುಕಾತ್ತಾ (ತಡೀಲಿಕ್ಕಾಗತ್ತ)? ಇಪ್ಪವ್ರ್ (ಇರುವವರು) ಬಗ್ಗೆ ಯೋಚ್ನೆ ಮಾಡ್" (ಸಾವಿನ ಮನೆಯಲ್ಲಿ ಕೇಳುವ ಮಾತು).

ಈ ಶಬ್ದದ ಮೂಲ ನನಗೆ ಗೊತ್ತಿಲ್ಲ. ಸಾಹಿತ್ಯದಲ್ಲೂ ಉಪಯೋಗಿಸಿದ ಬಗ್ಗೆ ಗೊತ್ತಿಲ್ಲ. ಆದರೆ ನಮ್ಮ ಭಾಗವತ್ರು ಪ್ರಾಥಮಿಕ ಶಾಲೆಯಲ್ಲಿದ್ದಾಗ ಅಕ್ಕನಿಗೆ ಬರೆದ ಪತ್ರವೊಂದರಲ್ಲಿ ಇದನ್ನ ಉಪಯೋಗಿಸಿದ್ದಾರೆ. ಅದರ ಒಂದು ಚರಣ:-
ತಿಂಗಳೊಂದಾಯ್ತು ಹತ್ರ ಹತ್ರ
ಬರೆದಿಲ್ಲವೇಕೆ ನೀನಿನ್ನೂ ಉತ್ರ
ಕೆದಕುತ್ತಿಹರು ಕಾರಣದ ಚರಿತ್ರ
ಆರಂಭವಾಗಿದೆ ಎಣ್ಣುವಿಕೆಯ ಸತ್ರ

ಅಂದಹಾಗೆ ಮಾಲಾ ರಾವ್ (http://www.chitra-durga.blogspot.com/ )ಸಿದ್ಧಪಡಿಸುತ್ತಿರುವ ಜಗತ್ತಿನ ಅತಿಶ್ರೇಷ್ಠ ಕವನಗಳ ಪಟ್ಟಿಯಲ್ಲಿ ಈ ಮೇಲಿನ ಕವನವನ್ನೂ ಪರಿಗಣಿಸಲಾಗಿದೆ ಎಂದು ಬೊ.ರ.ಬ್ಯೂರೋದ 'ನಂಬಲನರ್ಹ' ಮೂಲಗಳಿಂದ ತಿಳಿದುಬಂದಿದೆ:-))

ಇವತ್ತಿನ ಸವಾಲು:-
ಇದರ ಅರ್ಥ ಏನು - 'ಮಿಣ್ಣಗೆ'? ಇದನ್ನು ಕನ್ನಡದ ಹೆಸರಾಂತ ಕವಿಯೊಬ್ಬರು ತಮ್ಮ ಕಾವ್ಯವೊಂದರಲ್ಲಿ ಉಪಯೋಗಿಸಿದ್ದಾರೆ. ಅವರ ಹೆಸರೇನು?
Hint : ತುಳಸಿಯಮ್ಮನವರು ಈ ಕವಿಯ ಜೊತೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ:-))

February 17, 2007

ಕಾಂತ, ಕಾಂತೆ

ಈ ವಾರ ಎಲ್ಲಕಡೆನೂ ಪ್ರೇಮಜ್ವರ. ಹಾಗಾಗಿ ಇವತ್ತಿನ ಶಬ್ದ 'ಕಾಂತ, ಕಾಂತೆ':-))
ಕಾಂತ = ಕಾಣ್ತಾನೆ.
ಕಾಂತೆ = ಕಾಣ್ತೇನೆ.

ಕಂದಾಪ್ರ ಕನ್ನಡಕ್ಕೆ ಅದರದ್ದೆ ಆದ ರಚನೆ ಇದೆ. ಇವುಗಳನ್ನ ನೋಡಿ:-
ಕಾಂತ = ಕಾಣ್ತಾನೆ, ಕೇಂತ = ಕೇಳ್ತಾನೆ, ಹೋತ = ಹೋಗ್ತಾನೆ, ಬತ್ತ = ಬರ್ತಾನೆ,
ಕಾಂತೆ = ಕಾಣ್ತೇನೆ, ಕೇಂತೆ = ಕೇಳ್ತೇನೆ, ಹೋತೆ = ಹೋಗ್ತೇನೆ, ಬತ್ತೆ = ಬರ್ತೇನೆ,
ಕಾಂತ್ರ್ಯ = ಕಾಣ್ತೀರ, ಕೇಂತ್ರ್ಯ = ಕೇಳ್ತೀರ, ಹೋತ್ರ್ಯಾ = ಹೋಗ್ತೀರ, ಬತ್ತ್ರ್ಯಾ = ಬರ್ತೀರಾ,
ಕಾಣಿ = ನೋಡಿ, ಕೇಣಿ = ಕೇಳಿ, ಹೋಯಿನಿ = ಹೋಗಿ, ಬನ್ನಿ = ಬನ್ನಿ:-)
ಕಾಂಬ್ರ್ಯಲೆ = ಕಾಣುವಿರಲ್ಲ, ಕೇಂಬ್ರ್ಯಲೆ = ಕೇಳುವಿರಲ್ಲ, ಹೋಪ್ರ್ಯಲೆ = ಹೋಗುವಿರಲ್ಲ, ಬಪ್ಪ್ರ್ಯಲೆ = ಬರುವಿರಲ್ಲ,
ಕಂಡ = ನೋಡಿದ, ಕೇಂಡ = ಕೇಳಿದ, ಹೋದ = ಹೋದ, ಬಂದ = ಬಂದ.

ನಮ್ಮ ಚಲನಚಿತ್ರ ಸಾಹಿತ್ಯದಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುವುದು:-
ಕಾಂತ - ಕಾಂತೆ,
ಇನಿಯ - ಇನಿಯೆ(?),
ನಲ್ಲ - ನಲ್ಲೆ,
ಪ್ರಿಯತಮ - ಪ್ರಿಯತಮೆ,
ಪ್ರಿಯಕರ - ಪ್ರಿಯಕ(ರೆ,ರಿ?),
ಪ್ರಿಯ - ಪ್ರಿಯೆ,
ಮತ್ತೆ ನಮ್ಮ ಯಕ್ಷಗಾನದಲ್ಲಿ - ರಮಣ, ವಲ್ಲಭ:-))

ಭಾಷೆ ಸಂಸ್ಕೃತಿಯ ಪ್ರತೀಕ ಅಂತಾರೆ. ಕೆಲವೊಂದು ಪದ ಪ್ರಯೋಗಗಳು ನಮ್ಮ ನಂಬಿಕೆಯಿಂದ ತುಂಬ ಪ್ರಭಾವಿತವಾಗಿವೆ.
ಮನೆಯಿಂದ ಹೋಗುವಾಗ - ಬತ್ತೆ - ಅನ್ತೇವೆ. 'ಹೋತೆ' ಅನ್ನೋಹಾಗಿಲ್ಲ:-) ನೆಂಟರ ಮನೆಯಾದ್ರೆ -'ಬತ್ತೆ, ನೀವೆಲ್ಲ ಕೂಕಣಿ (ಕೂತ್ಕೊಳ್ಳಿ)':-))
ಅದೇ ಆಸ್ಪತ್ರೆಗೆ ರೋಗಿಯನ್ನ ನೋಡ್ಲಿಕ್ಕೆ ಹೋಗಿದ್ರೆ - 'ಹೋತೆ'. 'ಬತ್ತೆ' ಅನ್ನೊ ಹಾಗಿಲ್ಲ. ಡಾಕ್ಟರ್ ಬಳಿನೂ 'ಹೋತೆ':-))ನಮ್ಮ ಮನೇಲಿ ರಾತ್ರಿ ದೀಪ (ಲೈಟು, ಕರೆಂಟು) ಆರಿಸ್ಬೇಕಾದ್ರೆ -ದೀಪ ದೊಡ್ಡದು ಮಾಡ್ - ಅಂತಾರೆ. ದೀಪ ಆರಿಸು ಅನ್ನೊ ಹಾಗಿಲ್ಲ:-))

ಆಯ್ತು. ಇವತ್ತಿಗ್ ಮಸ್ತ್ ಆಯ್ತ್. ನಾನ್ ಬತ್ತೆ. ನೀವೆಲ್ಲ ಕೂಕಣಿ.
Reborn, ನಾನ್ ಹೋತೆ:-))

ಇವತ್ತಿನ ಸವಾಲು -ಇದರ ಅರ್ಥ ಏನು? - 'ಎಣ್ಣು'

February 13, 2007

ದಸ್ಕತ್ತು

ದಸ್ಕತ್ತು = ಸಹಿ, ಹಸ್ತಾಕ್ಷರ
ಮೂಲ - ದಸ್ತಕತ್ (ಪ್ರಾಯಶಃ). ಇದು ಕೇವಲ ಕುಂದಗನ್ನಡದ ಶಬ್ದವೋ, ಇಲ್ಲ ಬೇರೆ ಕಡೆನೂ ಉಪಯೋಗಿಸ್ತಾರೊ ಗೊತ್ತಿಲ್ಲ.

ಮನಸ್ವಿನಿ ನಂಗೆ ನೂರು ಡಾಲರ್ ಕೊಡುದಿತ್ತ್ (ಕೊಡ್ಬೇಕಿದೆ). ನಾನ್ 'ದಸ್ಕತ್ತ್' ತಕಂಬ್ದ್ (ತೆಗೆದುಕೊಳ್ಳೊದು) ಒಳ್ಳಿದ್ (ಒಳ್ಳೆಯದು):-)
ತುಳಸಿಯಮ್ಮ, ನನ್ನ ಗುರುದಕ್ಷಿಣೆ ಏಗ್ಳಿಕೆ (ಯಾವಾಗ) ಕೊಡ್ತ್ರಿ(ಕೊಡ್ತೀರಾ)? ನಿಮ್ಮತ್ರ 'ದಸ್ಕತ್ತ್' ತಕಣ್ಕ (ತೆಗೆದುಕೊಳ್ಬೇಕ)?:-) ,
Reborn, ನಿಮಗೆ 'ದಸ್ಕತ್ತ್' ಹಾಕುಕ್ (ಹಾಕ್ಲಿಕ್ಕೆ) ಬತ್ತಾ (ಬರತ್ತ)? ಅಥ್ವಾ ಹೆಬ್ಬೆಟ್ಟಾ?:-)

'ದಸ್ಕತ್ತ್'ಗೆ ಇನ್ನೊಂದು ಅರ್ಥ ಇದೆ.
ದಸ್ = ೧೦, ಕತ್ತ್ = ಕತ್ತು = ಕಂಠ.
ದಸ್ಕತ್ತು = ರಾವಣ:-)

ನಿನ್ನೆಯ ಸವಾಲಿಗೆ ಉತ್ರ:-
'ಕಾಣಿ' = ನೋಡಿ,
'ಕಾಣಿ' - ಇದು ಒಂದು ಸಣ್ಣ ಮೀನಿನ ಹೆಸರು ಸಹ ಹೌದು:-)
ಕುಂದಾಪ್ರ ಕಾಣಿ ರುಚಿ ಕಾಣಿ = ಕುಂದಾಪ್ರ ಮೀನಿನ ರುಚಿ ನೋಡಿ:-)
ಇದನ್ನ ನಾನು ಎತ್ತಿಕೊಂಡದ್ದು ಡುಂಡಿರಾಜರ ಕವನವೊಂದರಿಂದ ('ಏನಾಯಿತು' ಕವನ ಸಂಕಲನ). ಅದರ ಪೂರ್ಣರೂಪ ನನಗೆ ಗೊತ್ತಿಲ್ಲ. ಅದರ ಕೆಲವು ಸಾಲು ಹೀಗಿವೆ:-
ಹೊಟ್ಟಿಗ್ ಹಿಟ್ಟ್ ಇಲ್ದೆ ಮರ್ಕಿ ಮರ್ಕಿ
ಹೊಳಿ ನೀರ್ ಸೈತ ಉಪ್ಪು
ಹೊಟ್ಟಿ ಥರ ತಲಿಯೂ ಖಾಲಿ
ಅನ್ಕಂಡ್ರೆ ಅದ್ ನಿಮ್ಮ್ ತಪ್ಪು

ಸಾಹಿತ್ಯಕ್ಕೇನ್ ಕೊಟ್ಟಿರಿ ಅಂತ್ ಕೇಂಡ್ರೆ
ಕಾರಂತ್ರೊಬ್ರೆ ಸಾಲ್ದ?
......ನಂಗ್ ಮುಂದ್ ಗೊತ್ತಿಲ್ಲ..:-))

ಡುಂಡಿರಾಜ್, ಚುಟುಕಗಳಷ್ಟೆ ಸಮರ್ಥವಾಗಿ ಗಂಭೀರ ಸಾಹಿತ್ಯವನ್ನೂ ಬರೆದಿದ್ದಾರೆ. ಆದರೆ ಅವರಿವತ್ತಿಗೂ ಗುರುತಿಸಲ್ಪಡುವುದು ಚುಟುಕಗಳ ಮೂಲಕವೆ. ಅವರ - 'ಏನಾಯಿತು' - ಸಂಕಲನ ತುಂಬ ಚೆನ್ನಾಗಿದೆ. 'ಆಯದ ಕವನಗಳು' ಅಂತ ಇನ್ನೊಂದು ಸಂಕಲನವಿದೆ. ಅವರ ನಾಟಕಗಳೂ ಚೆನ್ನಾಗಿವೆ - ನಾಳೆ ಬನ್ನಿ, ವೇಷಾಂತರ ಪ್ರಸಂಗ, ಕೊರಿಯಪ್ಪನ ಕೊರಿಯೋಗ್ರಫಿ ನನಗೆ ಇಷ್ಟವಾದವು.

February 11, 2007

ಹುಗ್ಸಿಡು, ಅಂಡ್ಕಂಬ್ದು

'ಹುಗ್ಸಿಡು' = ಬಚ್ಚಿಡು,
ಮೂಲ - 'ಹುದುಗಿಸಿಡು'.
ಅಕ್ಕ, ನನ್ನ ಕ್ರಿಕೆಟ್ ಬ್ಯಾಟ್ ಎಲ್ಲ್ 'ಹುಗ್ಸಿಟ್ಟಿದೆ'?
ತುಳಸಿಯಮ್ಮ, ನನ್ನ ಗುರುದಕ್ಷಿಣೆ ಎಲ್ಲ್ 'ಹುಗ್ಸಿಟ್ಟಿರಿ'?

ಗದಾಯುದ್ಧ ಯಕ್ಷಗಾನ ಪ್ರಸಂಗದ ಒಂದು ಪದ್ಯ - (ದುರ್ಯೋಧನ ಸಂಜಯನಿಗೆ ಹೇಳ್ತಾನೆ)
"ಇದೆ ಒಂದು ಸರೋವರವು ಇಲ್ಲಿಗೆ ಸಮೀಪದಲಿ, 'ಹುದುಗಿರುವೆ'ನೈ ನಾನು ಅರಿಗಳ್ ಅರಿಯದಂದದಲಿ"

'ಅಂಡ್ಕಂಬ್ದು' = ಅಡಗಿಕೊಳ್ಳು

ಅನ್ವೇಷಿಗಳೆ, ಪತ್ತೆನೆ ಇಲ್ಲ ಇತ್ತೀಚೆಗೆ. ಎಲ್ಲ್ 'ಅಂಡ್ಕಂಡಿರಿ'?
ಶ್ರೀ, ಬೆಂಗ್ಳೂರಲ್ಲ್ ಕಾವೇರಿ ಗಲಾಟಿ ಆತ್ತ್. ಒಳ್ಳೆ ಜಾಗದಲ್ಲ್ 'ಅಂಡ್ಕಣಿ',

'ಅಂಡ್ಕಂಡ' = ಅಡಗಿಕೊಂಡ
'ಅಂಡ್ಕಂತ' = ಅಡಗಿಕೊಳ್ಳುತ್ತಾನೆ
'ಅಂಡ್ಕಣಿ' = ಅಡಗಿಕೊಳ್ಳಿ
'ಅಂಡ್ಕೊ' = ಅಡಗಿಕೊ

ಇವತ್ತಿನ ಸವಾಲು
ಇದರ ಅರ್ಥ ಏನು? - "ಕುಂದಾಪ್ರ ಕಾಣಿ ರುಚಿ ಕಾಣಿ"

January 28, 2007

Updates on Kathana

Kathana (jaagatika Kannadigara kooTa) is a group of like minded Kannadaabhimaani software engineers. Please follow this link for more information - http://kathana.qns.googlepages.com/

Last year we conducted state level Kannada story writing competiion and published a book of winning stories. We have been able to sell most of the Kathana books. We have set aside 200+ copies to be distributed across the libraries in Karnataka. We have limited copies available for sale. The proceeds from the book sale will go towards a social cause. We are in the process of finalizing the plans and budget for this year. Once the plans are finalized, we will identify a deserving Kannada school in rural area and will help the school either in infrastructure or in educational materials. We do not believe in just donating some money and hence Kathana will actively participate in the entire process. We are working towards building a reliable network of schools, educationists and intellectuals.

Following are the plans for this year.
1) Bringing out a book on the subject of - 'JaagateekaraNa mattu Kannada'. We will invite articles from 4 - 5 eminent scholars. The book is intended to discuss the challenges of globalization on Kannada and Kannada identity and also how Kannada should adapt and face those challenges. The timelines are from January to April. We are in the process of finalizing the names of writers.
2) Conducting a competition - either story writing or Science report writing in Kannada. The timelines are from June-July to October.

We are determined to take this initiative to the next orbit. Kathana will engage in activities of encouraging budding Kannada writers, publishing Kannada books of superior literary qualities and helping Kannada schools. We will give periodic updates about Kathana's activities to maintain the continuum. We need your continued support to make this success.

September 16, 2006

ಮೊನ್ನೆ ಉದಯವಾಣಿ ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಒಂದು ವರದಿ ಗಮನಸೆಳೆಯಿತು. ಒತ್ತಿನೆಣೆಯಲ್ಲಿ ನಡೆದ ಪ್ರತಿಭಟನೆಯ ವರದಿಯದು. ಬಳ್ಳಾರಿಯ ಗಣಿಗಳ ಅದಿರು ವಿದೇಶಕ್ಕೆ ರಫ್ತಾಗುವುದು ನವಮಂಗಳೂರು ಬಂದರಿನ ಮೂಲಕ. ಈ ಮಾರ್ಗದ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದರಿ ೧೭. ಈ ರಸ್ತೆ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಜೀವನಾಡಿ. ಅದು ಉಭಯಜಿಲ್ಲೆಗಳ ಆರ್ಥಿಕ ವ್ಯವಹಾರಗಳ ಮುಖ್ಯ ಕೊಂಡಿ ಕೂಡ.

ಕಳೆದ ಹಲವು ವರ್ಷಗಳಿಂದ ಅಧಿಕ ಭಾರದ ಅದಿರು ಹೊತ್ತ ಲಾರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿ ರಸ್ತೆ ಗಬ್ಬೆದ್ದಿತ್ತು. ರಸ್ತೆಯ ಧಾರಣ ಸಾಮರ್ಥ್ಯವನ್ನು ಮೀರಿದ ಭಾರವಾಹನಗಳಿಂದ ರಸ್ತೆಗೆ ಸಂಚಕಾರ ಬಂದಿತ್ತು. ಶಿರೂರು (ಉಡುಪಿ ಜಿಲ್ಲೆಯ ಉತ್ತರ ತುದಿ) ಬಳಿಯಿದ್ದ weigh bridge ಗಣಿ ಲಾರಿ ಮಾಲೀಕರ ಒತ್ತಡದಿಂದ ರಾತ್ರೋರಾತ್ರಿ ಮಾಯವಾಗಿತ್ತು. ಈ ಲಾರಿಗಳು ಸೃಷ್ಟಿಸಿದ ಸಮಸ್ಯೆಗಳು ಒಂದೆರಡಲ್ಲ. ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಪ್ರತಿಭಟಿಸಿದರೂ ರಾಜಕೀಯ ಒತ್ತಡದಿಂದಾಗಿ ಲಾರಿಗಳ ದಾಂಧಲೆ ಅವ್ಯಾಹತವಾಗಿ ನಡೆದಿತ್ತು. ರಸ್ತೆ ಇನ್ನೇನು ಕೈ ಬಿಟ್ಟಿತು ಅನ್ನುವಾಗ ನಡೆದದ್ದು ಮೊನ್ನಿನ ಪ್ರತಿಭಟನೆ. ಸರ್ವಪಕ್ಷಗಳ ಪ್ರತಿನಿಧಿಗಳು, ವಿವಿಧ ಸಾಮಾಜಿಕ ಸಂಘಟನೆಗಳು ಕೈಜೋಡಿಸಿ ನಡೆಸಿದ ೫ ದಿನಗಳ ಪ್ರತಿಭಟನೆಗೆ ಅಂತೂ ಜಯಸಿಕ್ಕಿತು. ೫ ದಿನಗಳಲ್ಲಿ ೨೦೦ಕ್ಕೂ ಮಿಕ್ಕಿ ಲಾರಿಗಳನ್ನು ತಡೆಹಿಡಿಯಲಾಯಿತು. weigh bridge ಅಂತೂ ಇಂತೂ ಶಿರೂರಿಗೆ ಮತ್ತೊಮ್ಮೆ ಬಂತು. ಬಹುಷಃ ಇನ್ನಾದರೂ ರಸ್ತೆಗಳು ಉಳಿದಾವು.

ಇಂಥದ್ದೆ ಒಂದು ತಪ್ಪಿಗೆ ಬಲಿಯಾದದ್ದು ಹೊನ್ನಾವರದ ಶರಾವತಿ ಸೇತುವೆ (ರಾಜ್ಯದ ಅತಿ ದೊಡ್ಡ ಸೇತುವೆ. ೧ ಕಿ.ಮಿ.ಗಿಂತಲೂ ಉದ್ದವಿದೆ). ಅಲ್ಲಿ ಹಲವು ವರ್ಷಗಳ ಕಾಲ ಸೇತುವೆ ಕೆಟ್ಟು bargeಗಳಲ್ಲಿ ಸಂಚರಿಸಬೇಕಾಗಿತ್ತು. barge ಮಾಲಿಕರ ಒತ್ತಡಕ್ಕೆ ಸಿಲುಕಿ ರಸ್ತೆ ದುರಸ್ತಿಯೂ ತೀರ ನಿಧಾನವಾಗಿತ್ತು. ಒಟ್ಟಿನಲ್ಲಿ ಪಾಡುಪಟ್ಟಿದ್ದು ಮಾತ್ರ ಸಾಮಾನ್ಯ ಜನತೆ. ಉತ್ತರ ಕನ್ನಡದ ಇಡೀ ಆರ್ಥಿಕ ವ್ಯವಸ್ಥೆಯನ್ನೆ ನುಂಗಿಹಾಕಿತ್ತದು.

ಈ lobbyಗಳ ಸಾಲಿನಲ್ಲಿ ಇನ್ನೊಂದು ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲುಹಾದಿಯ braodgauge ಪರಿವರ್ತನೆ. ಖಾಸಗಿ ಬಸ್ಸುಗಳ ಮಾಲಿಕರ ಒತ್ತಡದಿಂದ ರೈಲು ಇನ್ನೂ ಓಡಾತ್ತಿಲ್ಲ. ಖಾಸಗಿ ಬಸ್ಸುಗಳಿಗೆ ಬೆಂಗಳೂರು ಮಂಗಳೂರು ಹಾದಿ ತೀರ ಲಾಭದಾಯಕ. ರೈಲು ಬಂದರೆ ಆ ಇಡೀ ವ್ಯವಸ್ಥೆಗೆ ಸಂಚಕಾರ ಬರುವುದರಿಂದ ಅವರ ವಿರೋಧ. ಇಲ್ಲೂ ಪಾಡುಪಟ್ಟಿದ್ದು ಮಾತ್ರ ಸಾಮಾನ್ಯ ಜನತೆ.

ನಮ್ಮಲ್ಲಿ ಇಂತಹ ಹಲವಾರು ಸಮಸ್ಯೆಗಳಿವೆ. ನಂದಿಕೂರು, ನಾಗಾರ್ಜುನ ಯೋಜನೆ, ಇತ್ತೀಚೆಗೆ ಪ್ರಸ್ತಾಪವಾಗುತ್ತಿರುವ ಉತ್ತರಕನ್ನಡದ ತದಡಿ ವಿದ್ಯುತ ಸ್ಥಾವರ...ಇಲ್ಲೆಲ್ಲ ಅಸಲಿಯಾಗಿ ಏನು ನಡೆಯುತ್ತಿದೆ? ಯಾರ ಲಾಭಕ್ಕಾಗಿ ಈ ಎಲ್ಲ ಯೋಜನೆಗಳು? ಈ ಯೋಜನೆಗಳ ಅಪಾಯಗಳೇನು?...ಯಾರಿಗೂ ಗೊತ್ತಿರುವುದಿಲ್ಲ. ಎಲ್ಲ ನಿರ್ಧಾರಗಳು ರೂಪುಗೊಳ್ಳುವುದು ಭ್ರಷ್ಟ ರಾಜಕೀಯ ಪಡಸಾಲೆಗಳಲ್ಲಿ, ಲಾಭಕ್ಕಾಗಿ ಹಸಿದಿರುವ ವ್ಯಾಪಾರಿಗಳ ಬಂಗಲೆಗಳಲ್ಲಿ.

ಕೇವಲ ಸಣ್ಣದೊಂದು ಸ್ವಹಿತಾಸಕ್ತ ಗುಂಪಿನ ಲಾಭಕ್ಕಾಗಿ ನಮ್ಮ ನೆಲ, ನಮ್ಮ ಪರಿಸರ ನಾಶವಾಗುತ್ತಿದೆ. ಯಾರದೋ golf courseನ ಹಣಕ್ಕಾಗಿ ನಮ್ಮ ರಸ್ತೆಗಳು ಅತ್ಯಾಚಾರಕ್ಕೊಳಗಾಗುತ್ತವೆ. ಯಾರದೋ ಐಷಾರಾಮಿ ಜೀವನದ ತೆವಲಿಗಾಗಿ, ಬಕಾಸುರ ಲಾಭದ ಹಸಿವಿಗಾಗಿ ನಮ್ಮ ನದಿಗಳು ಬರಡಾಗುತ್ತವೆ, ಊರುಗಳು ಮುಳುಗುತ್ತವೆ, ಜನಾಂಗ ಸಂಸ್ಕೃತಿಗಳೆ ಕಣ್ಮರೆಯಾಗುತ್ತವೆ.

July 9, 2006

ಮಸ್ತ್

ಮಸ್ತ್ , mast = ತುಂಬ, too much, too many.

ಅವ್ನಿಗೆ 'ಮಸ್ತ್' ಸಂಬಳ ಬತ್ತ್ (ಬರತ್ತೆ). ಎಷ್ಟ್ ಅಂತ ಬೇಕಿದ್ರೆ ಅವನನ್ನೆ ಕೇಣಿ:-)
ಕೋಟದ ಹುಡ್ಗೀರು 'ಮಸ್ತ್' ಜೋರ್:-)
ಮದಿ 'ಮಸ್ತ್' ಗಡ್ಜಾ? 'ಮಸ್ತ್' ಜನ ಬಂದಿದ್ರಾ?
'ಮಸ್ತ್' ಕೆಲ್ಸವಾ ಈಗ?

ಹವ್ಯಗನ್ನಡದ ಸಮಾನಾರ್ಥಕ ಪದ - 'ರಾಶಿ'.
'ಹವ್ಯಕ ಹುಡ್ಗೀರು ನೋಡುಲೆ 'ರಾಶಿ' ಚಂದ, ಹೇಳಿ:-)

ಇವತ್ತಿಗೆ 'ಮಸ್ತ್' ಆಯ್ತ್. ನಾಳಿಗೆ ಕಾಂಬ.

June 28, 2006

ಕೇಂಬುದು

ಕೇಂಬುದು (kEMbudu) = ಕೇಳುವುದು.

This word takes various forms depending on the usage.
ಕೇಣ್, kEN = ಕೇಳು (singular,)
ಪಾಠ ಸರಿ ಮಾಡಿ 'ಕೇಣ್'

ಕೇಣಿ, kENi = ಕೇಳಿ (plural)
ಪಾಠ ಸರಿ ಮಾಡಿ ಕೇಣಿ.

ಕೇಂತಾ, kEMtaa? = ಕೇಳಿಸಿತಾ?
ನಾನ್ ಹೇಳಿದ್ದ್ ನಿಂಗೆ ಕೇಂತಾ? (did u hear what I said?).

ಕೇಂಡ್, kEMD = ಕೇಳಿ.
ನಾನ್ ಅವನನ್ನ ಕೇಂಡ್ ಹೇಳ್ತೆ. (ನಾನು ಅವನನ್ನ ಕೇಳಿ ಹೇಳ್ತೇನೆ).
ಕೇಂಡ, kEMDa = ಕೇಳಿದ.
ರಾತ್ರಿ ಪೂರ್ತಿ ರಾಮಾಯಣ ಕೇಂಡ್, ಬೆಳಿಗ್ಗೆ ಎದ್ದ್ 'ರಾಮನಿಗೂ ಸೀತೆಗೂ ಎಂತ ಸಂಬಂಧ' ಅಂತ 'ಕೇಂಡ'.

ಕೇಂಡ್ರ್ಯಾ, kEMDryaa? = ಕೇಳಿದಿರಾ?
ಅವ ಎಂತ ಹೇಳ್ದ ಕೇಂಡ್ರ್ಯಾ?

ನಾನ್ ಕೇಂತೆ (ನಾನು ಕೇಳುತ್ತೇನೆ).
ನೀನ್ ಕೇಣ್ (ನೀನು ಕೇಳು).
ಅವ ಕೇಂತ (ಅವ ಕೇಳುತ್ತಾನೆ).

June 25, 2006

ಬಪ್ಪುದು, ಹೋಪುದು

ಬಪ್ಪುದು - bappudu = ಬರುವುದು, coming,
ಹೋಪುದು - hOpudu = ಹೋಗುವುದು, going.

ಭಾರತಕ್ಕೆ 'ಬಪ್ಪುದ್' ಏಗ್ಳಿಕೆ?. ಅಮೇರಿಕಕ್ಕೆ ಹೋಪುದು ಏಗ್ಳಿಕೆ?
ಪಾರ್ಟಿ ಗಡ್ಜಾ (ಗಡದ್ದಾ)? ನಾನೂ ಬಪ್ಪುದಾ?.
ಊರಿಗೆ ಹೋಪುದು ಏಗ್ಳಿಕೆ?

Some variant forms of the above words
ಬತ್ತೆ = ಬರ್ತೇನೆ. ಹೋತೆ = ಹೋಗ್ತೇನೆ.
ನಾನ್ ಬತ್ತೆ. ನಾನ್ ಇವತ್ತ್ ಊರಿಗೆ ಹೋತೆ.

ಬತ್ತ್ಯಾ = ಬರ್ತೀಯಾ? ಹೋತ್ಯಾ = ಹೋಗ್ತೀಯಾ?
ನೀನ್ ಬತ್ತ್ಯಾ ಊರಿಗೆ? ನೀನ್ ಊರಿಗೆ ಹೋತ್ಯಾ?

ಬತ್ತ - ಬರ್ತಾನೆ, ಹೋತ = ಹೋಗ್ತಾನೆ.
ಅವ ಇವತ್ತ್ ಊರಿಗೆ ಬತ್ತ. ಅವ ಇವತ್ತ್ ಬೆಂಗ್ಳೂರಿಗೆ ಹೋತ.

June 21, 2006

ಏಗ್ಳಿಕೆ

ಏಗ್ಳಿಕೆ (EgLike)

ನನ್ನ ಊಹೆಯ ಪ್ರಕಾರ ಇದರ ಮೂಲ - ಏಗಳ್ (EgaL) -ಹಳೆಗನ್ನಡ.

ಏಗ್ಳಿಕೆ = ಯಾವಾಗ, When

ಉದಾಹರಣೆ
ನಿಂಗೆ (ನಿನಗೆ) ರಜೆ ಸಿಕ್ಕುದ್ (ಸಿಗುವುದು) 'ಏಗ್ಳಿಕೆ'?
ಪರೀಕ್ಷೆ ರಿಸಲ್ಟ್ಸ್ 'ಏಗ್ಳಿಕೆ' ಗೊತ್ತಾಪ್ಪುದು (ಗೊತ್ತಾಗುವುದು)?
ಮದಿ (ಮದುವೆ) 'ಏಗ್ಳಿಕೆ'?

June 4, 2006

ಗಡ್ಜು

ಗಡ್ಜು - gaDju.

ಗಡ್ಜು - ಗಡದ್ದು (ನನ್ನ ಊಹೆಯ ಪ್ರಕಾರ ಇದು ಮೂಲರೂಪ)

ಗಡ್ಜು = ವಿಜೃಂಭಣೆ - vijraMbhaNe (grand).

Examples : -
ಮದಿ ಗಡ್ಜಾ? ಊಟ ಗಡ್ಜಾ?
madi (wedding) gaDjaa? ooTa gaDjaa?

ಕುಂದಾಪ್ರ ಕನ್ನಡ

ಕುಂದಗನ್ನಡ ನನ್ನ ಪ್ರಕಾರ ಬಹಳ ವೈವಿಧ್ಯಮಯವೂ, ಶ್ರೀಮಂತವೂ ಆದ ಭಾಷೆ. ಕುಂದಗನ್ನಡದಲ್ಲಿನ ಹಲವಾರು ವಿಶಿಷ್ಟ ಪದಗಳು ನನಗೆ ಯಾವತ್ತೂ ಕುತೂಹಲ ಮೂಡಿಸುತ್ತವೆ.
ಉದಾಹರಣೆಗೆ ಈ ಶಬ್ದಗಳು-ಚಾಂದ್ರಾಣ, ಅಟ್ರಕಾಣಿ, ತದ್ಯಾಪ್ರತ, ಹಕ್ಲಕಥೆ, ಹರ್ಕಟಿ... ಇವುಗಳ ಶಬ್ದನಿಷ್ಪತ್ತಿಯ ಕುರಿತು ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

ಕೆಲವೊಂದು ಶಬ್ದಗಳಿಗೆ ನನ್ನ ಊಹೆಯ ಪ್ರಕಾರದ ಸಂವಾದಿ 'ಗ್ರಂಥಸ್ಥ' ಕನ್ನಡದ ಶಬ್ದ ಕೊಟ್ಟಿದ್ದೇನೆ. ಇವೆಲ್ಲವೂ ಮೂಲಶಬ್ದಗಳ ಅಪಭ್ರಂಶಗಳು.
ಮರ್ಕು (ಮರುಕ, ಮರುಗುವುದು) = ಅಳು,
ಮೇನತ್ತು (ಮೆಹನತ್ತು) = ವಿಶೇಷ - ನಾನ್ ಮೇನತ್ತ್ ಅಂದ್ಕಂಡ್ ಮಾಡಿದೆ ಕಾಣ್,
ಏಗ್ಳಿಕೆ (ಏಗಳ್ - ಹಳೆಗನ್ನಡ)=ಯಾವಾಗ - ಮದಿ (ಮದುವೆ) ಏಗ್ಳಿಕೆ?
ನೀಕು (ನಿಲುಕು).

ಇನ್ನೊಂದಿಷ್ಟು ಕನ್ನಡ ಶಬ್ದಗಳ ಪ್ರಯೋಗ ನಮ್ಮಲ್ಲಿ ವಿಶಿಷ್ಟವಾಗಿದೆ.
ನಿಘಂಟು = ಖಚಿತತೆ - ಉಪನಯನ ಏಗ್ಳಿಕೆ ಅಂತೇಳಿ ಇನ್ನೂ ನಿಘಂಟಿಲ್ಲ.
ಸಾಬೀತು = ನಿರ್ವಿಘ್ನ - ಉಪನಯನ ಸಾಬೀತೆಗಾದ್ರೆ, ಅದೆ ದೊಡ್ಡದು.
ಕಂತು = ಮುಳುಗು - ಹೊತ್ತ್ ಕಂತಿಯಾಯ್ತಲೆ ಮಣಿ ಹಂಗರೆ, ಸಾಲ್ದಾ ಆಡದ್ದ್?

ಇಗೊ ಕನ್ನಡ(ಕನ್ನಡ ಪದಗಳ ವ್ಯುತ್ಪತ್ತಿ, ಪದಪ್ರಯೋಗಗಳ ಕುರಿತಾದ ಗ್ರಂಥ)ದಲ್ಲಿ ನಾನು ಓದಿದ ಒಂದು ಶಬ್ದದ ವಿವರಣೆ - ಈ ಪದ ಕುಂದಾಪುರದ ಬಳಿಯ ಶಾಸನವೊಂದರ ಮೂಲಕ ದೊರೆತಿದೆ. ಈ ಶಬ್ದದ ಅರ್ಥ ಇದುವರೆಗೂ ಗೊತ್ತಾಗಿಲ್ಲ:-))

ಶಿವರಾಮ ಕಾರಂತರ 'ಹುಚ್ಚುಮನಸಿನ ಹತ್ತು ಮುಖಗಳು' ಕೃತಿಯಲ್ಲಿನ ಒಂದು ಮಾತು - "ಅಪ್ಪ ಹೋತ, ಮಗ ಆಡು":-))

ಮಂಗಳೂರಿನಿಂದ ಕುಂದಾಪುರದ ಶಾಲೆಯೊಂದಕ್ಕೆ ಅಧ್ಯಾಪಕರೊಬ್ಬರು ವರ್ಗವಾಗಿದ್ದರು. ಮೊದಲ ದಿನವೆ ವಿಧ್ಯಾರ್ಥಿಯೊಬ್ಬ ಬಂದು ಕೇಳಿದ್ದು - ಸಾರ್ ಇವತ್ತ್ ಪಾಠ ಮಾಡಿದ್ದೆಲ್ಲಾ 'ಬರ್ಕಂಬರ್ಕಾ'(ಬರೆದುಕೊಂಡು ಬರಬೇಕಾ)?

ಇಂಗ್ಲಿಷ್ ಪ್ರಾಧ್ಯಾಪಕರಿಗೂ ಕನ್ನಡ ಪಂಡಿತರಿಗೂ ಸ್ಪರ್ಧೆ ನಡೀತಂತೆ. ಕನ್ನಡದ ಯಾವುದೇ ವಾಕ್ಯವನ್ನು ಇಂಗ್ಲೀಷಿಗೆ ಅನುವಾದಿಸುತ್ತೇವೆ ಅಂತ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ಪಂಡಿತರು ಕೊಟ್ಟ ವಾಕ್ಯ - ಹರ್ಕಟಿ ಚಾಪಿ ಹಾಯ್ಕಂಡ್ ತೆವಡಸ್ಕಣಿ ಕಾಂಬೊ:-)

ನಮ್ಮೂರಿನ ಕಪ್ಪೆಗಳಿಗೂ ಇಂಗ್ಲಿಷ್ ಬರತ್ತೆ ಗೊತ್ತಾ? ಮಳೆ ಬರುವಾಗ ಅವು 'ನೀರು, ನೀರು' ಅನ್ನಲ್ಲ. ಬದಲಾಗಿ 'ವಟರ್, ವಟರ್' ಅನ್ನತ್ತೆ.:-)

May 21, 2006

ಚುಟುಕಗಳು

ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಬರೆದ ಪೆದ್ದು ಪೆದ್ದು ಚುಟುಕಗಳಿವು:-))

ಮೀಸಲಾತಿ
ಹೀಗೆಯೇ ಹೆಚ್ಚುತ್ತಿದ್ದರೆ
ಮೀಸಲಾತಿ
ಕಡೆಗೆ ಉಳಿಯುವುದೆರಡೆ
ಜಾತಿ
ಹಿಂದುಳಿದವರು
ಮತ್ತು
ಮುಂದುಳಿಯದವರು!

ನಾಪಿತನಿಗೆ
ತಲೆಬಾಗದಿದ್ದರೇನಂತೆ
ಪಿತನಿಗೆ,
ತಲೆಬಾಗಲೇಬೇಕು,
ನಾಪಿತನಿಗೆ! (ನಾಪಿತ = ಕ್ಷೌರಿಕ)

ಉದಾರವಾದ
ರಾಜಕಾರಣಿಯ ತೋರುವಿಕೆಯ
ಉದಾರವಾದ
ನಿಜದಲ್ಲಿ ವೋಟು ಪಡೆಯುವ
ಉದರ-ವಾದ

ನಿರುದ್ಯೋಗಿ
ಹಾಲು ಮಾರುವ ಯುವಕರು
ನಿರುದ್ಯೋಗಿಗಳಲ್ಲ,
ಅವರು ನಿಜವಾಗಿಯೂ
'ನೀರು'ದ್ಯೋಗಿಗಳು!

ವಾಸನೆ
ಚುನಾವಣೆ ಬಂತೆಂದರೆ
ರಾಜಕಾರಣಿಯ ಬಾಯಿಯಿಂದ
ವಾಸನೆ,
ಆದೇ
ಆಶ್ವಾಸನೆ!

ಕೆಲಸ
ಜಪಾನೀಯರಿಗೆ ದಿನವಿಡೀ
ಕೆಲಸ-ಮಯ
ನಮಗೋ ಅದು ಕೇವಲ
ಕೆಲ-ಸಮಯ

May 20, 2006

Charmadi

How to get there:
Charmadi is around 70 km from Mangalore and 15 to 20 km from Ujire. You can either go there by private or government buses or book your own vehicle.

Category: Trekking, Picnic.

Best time to Visit: November to February

Where to Stay:
Malaya Marutha guest house – If you want to stay here, you need prior permission from the forest department of Moodigere Taluk of Chikmaglur district.

Dharmasthala – Here you can stay in any of the guest houses. But please note that you will have to travel back and forth from Charmadi to Dharmasthala if you are on two day trip.

Near the waterfalls – You can stay near Kallarbe waterfalls. But you will need prior permissions, since the water falls is inside private estate owned by Yenepoya.

You can also stay in Balekallu gudda or Kode kallu. But be prepared well as there is no water point nearby.

Places of interest:
Charmadi ghat houses some of the most beautiful waterfalls and trekking spots. Listed below are the prominent ones among them.

1) Kallarbe waterfalls
This is one of the most beautiful waterfalls in Charmadi ghat. This is inside a private estate and you will need to get prior permission to see this waterfall. If you have permission you can take your vehicle inside the estate. You will still need to trek 2 to 3 km to reach the falls. The trek is moderate to difficult.














2) Dondole waterfalls
This is also known as Nayagara of Charmadi. But this is not as big as Kallarbe waterfalls.














3) Alekhan waterfalls
This is the most easily accessible waterfalls in Charmadi. This is around 4 km after a place called ‘Annappa Gudi’ (Gudi = temple) on the charmadi ghat road. You can see the waterfalls by standing in the road. You can get down to water if you want.










4) Kallugundi waterfalls
Another beautiful waterfalls in charmadi. This also requires trekking.

5) Balekallu gudda
The highest point in charmadi region, from where you can get a panoramic view of the entire region.










6) Kode kallu gudda
Kode = umbrella, kallu = rock. The place gets this name because of a rock in the shape of an umbrella.













7) Eri kallu gudda.













8) Numerous other places for trekkers and hikers.

Near by places of interest:
1) Bandaje waterfalls
This requires a rigorous trekking













2) Anadka waterfalls
Beautiful waterfalls. Very little trekking involved. Very easily accessible.


















3) Elaneeru waterfalls

















4) Yermayi waterfalls




















5) Ballarayana durga (fort)
6) Jamalabad fort
7) Dharmasthala
8) Karanji betta

Suggested itinerary:
You can spend all weekends for almost 2 months visiting various places in and around Charmadi. All these places are within 100 km from Mangalore.
One of the suggested itineraries –
Start on Friday night and stay in Dhrmasthala. Saturday morning you can visit Dharmasthala temple. Then go to Charmadi and meet the guide. You can cover Kallarbe and Alekhan waterfalls on Saturday. Stay in Malaya Maruta guest house for the night. You can cover Kode kallu and Balekallu gudda on Sunday.

Special Note:
You will need the help of local guide to cover all these places. Please do not try to venture into forest without the help of guides. There is one hotel in Charmadi. You will get the guide from there. The hotel owner is Hasanabba, a social activist. Yousuf, who works in his hotel, will guide you. Please book the guide in advance as it will help both you and Yousuf. He can take you anywhere in Charmadi. He charges rs.250 or 300 per day.