March 23, 2008

ದೇಶಕಾಲ

’ದೇಶಕಾಲ’ ತ್ರೈಮಾಸಿಕ ಪತ್ರಿಕೆಯ ಬಗ್ಗೆ ನಿಮಗೆ ಗೊತ್ತಿರಬಹುದು ಅಂತ ಅಂದುಕೊಳ್ತೇನೆ. ಗೊತ್ತಿಲ್ಲದಿದ್ದಲ್ಲಿ ಎಂ.ಎಸ್.ಶ್ರೀರಾಮ್ ಬರೆದಿರುವ ಲೇಖನವನ್ನು ಓದಿ. ’ದೇಶಕಾಲ’ಕ್ಕೆ ಒಂದು ವರ್ಷ ತುಂಬಿದಾಗ ಬರೆದ ಲೇಖನವದು.

’ದೇಶಕಾಲ’ಕ್ಕೆ ಮೂರು ವರ್ಷ ತುಂಬಿದಾಗ, ಭರವಸೆಯ ಹೊಸ ಬರಹಗಾರ, ನರೇಂದ್ರ ಪೈ ಬರೆದ ಲೇಖನ ಇಲ್ಲಿದೆ. ವಿವೇಕ ಶಾನಭಾಗರ ಸಂದರ್ಶನದ ಕೊಂಡಿಯೂ ಅಲ್ಲಿದೆ.

ಮತ್ತೆ, ಸ್ವಲ್ಪ ತಡವಾಗಿ ತಮ್ಮ ತಲೆಯ ಮೇಲೆ ಬೋಧಿವೃಕ್ಷವನ್ನು ಬೆಳೆಸಿಕೊಂಡವರ ಬರಹ ಇಲ್ಲಿದೆ.

ಭಾಗವತರು ಸಜ್ಜಾಗೃಹಕ್ಕೆ ತೆರಳಿ ಹಂಸತೂಲಿಕಾತಲ್ಪದಲ್ಲಿ ಪವಡಿಸಲು ಅಣಿಯಾಗುವುದರೊಂದಿಗೆ ಈ ಸಂಚಿಕೆಯು ಇಲ್ಲಿಗೆ ಪರಿಸಂಪನ್ನಗೊಂಡಿತು :-)

March 15, 2008

ಮಾರುವೇಷದಲ್ಲಿ ಬ್ಲಾಗ್ ಸಂಚಾರ

ಇವತ್ತು ಸುಮ್ಮನೆ ಒಂದು ಬ್ಲಾಗು ಪ್ರದಕ್ಷಿಣೆ. ಸೋಂಬೇರಿ ಭಾಗವತರಿಗೆ ಬರೆಯಲು ಬೇರೇನೂ ತೋಚುತ್ತಿಲ್ಲವಾದ್ದರಿಂದ ಓದುಗ ದೊರೆಗಳು ಇದನ್ನೋದಿ ಸಿಟ್ಟಾಗದೆ ಭಾಗವತರನ್ನು ಮನ್ನಿಸಬೇಕಾಗಿ ವಿನಂತಿ.

ಬೇಂದ್ರೆಯಜ್ಜನ ಕವಿತೆಗಳನ್ನು ನಾವೆಲ್ಲರೂ ಓದಿಯೇ ಇದ್ದೇವೆ. ಅವರ ಕುರಿತು ಸ್ವಲ್ಪ ಹೆಚ್ಚು ತಿಳಿದುಕೊಳ್ಳಬೇಕೆಂದರೆ ಇಲ್ಲಿಗೆ ಭೇಟಿ ಕೊಡಿ. ಇದು ನಮ್ಮ ಕಾಕಾ ಬರೀತಾ ಇರೋ ಬ್ಲಾಗ್. ಓದಿ ಇಷ್ಟವಾದ್ರೆ ಕಾಮೆಂಟಿಸಿ, ಖುಶಿಯಾಗಿ ಇನ್ನಷ್ಟು ಬರೀತಾರೆ:-)

ನಮ್ಮ ಗಮನ ಸೆಳೆದ ಇನ್ನೊಂದು ಬ್ಲಾಗ್ ಇಲ್ಲಿದೆ. ಆರು ಮಂದಿ ಕುರುಡರ ಕಥೆ ಗೊತ್ತಾ ನಿಮಗೆ? ಗೊತ್ತಿಲ್ಲದಿದ್ದಲ್ಲಿ ಒಮ್ಮೆ ಇಲ್ಲಿಗೆ ಭೇಟಿ ಕೊಡುವುದು ಒಳ್ಳೆಯದು.

ನಮ್ಮೂರಿನವರೊಬ್ರು ಈಗಷ್ಟೆ ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಬ್ಲಾಗ್ ಟ್ರಾಫಿಕ್ ನೋಡಿ ಸ್ವಲ್ಪ ಅಳುಕಿನಿಂದಲೆ ಆರಂಭಿಸಿದ್ದಾರೆ. ಓದುಗರು ಕಾಮೆಂಟಿಸಿ, ಕೈ ಕೊಟ್ಟು, ಅಂದ್ರೆ ಪ್ರೋತ್ಸಾಹ ಕೊಟ್ಟು ಆಚೆದಡ ಸೇರಿಸ್ಬೇಕಂತ ಅವರ ವಿನಂತಿ.

ಇಲ್ಲಿಗೆ ಸೋಂಬೇರಿ ಭಾಗವತರ ಈ ದಿನ ಸಮಾಪ್ತಿಯಾಯಿತು.